Dashavatara

  • Enu Karana Baya

    Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ, ಪ್ರಹ್ಲಾದವರದನರಸಿಂಹ ನರಸಿಂಹ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮಲೆತು ಮಾವನ ಕೊಂದು ನಿಂತೆ,ಇಂಥಾ ಭೂಮಿಗಿಳಿದನಾರಸಿಂಹ ನರಸಿಂಹ || ೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ…

  • Tiliyado Ninnata

    Composer : Shri Vyasa vittala [Kalluru Subbanacharya] ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನ ಮುಖಿಯರ ನಾಚಿಸುವ ಬಲುಹಯದಳದ ಬಹು ಹವಣೆಗಾರನೆ |ಅ.ಪ್.| ಆರು ಬಲ್ಲರು ನಿನ್ನ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮನೀರೊಳಗೆ ಮನೆ ಭಾರ ಬೆನ್ನಿಲಿ ಕೋರೆದಾಡೆಯ ನಾರಸಿಂಹನೆಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ…

  • Baro Gopinatha

    Composer : Shri Vijayaramachandra vittala ಬಾರೊ ಗೋಪಿನಾಥ ನಿನ್ನಗಲಿರಲಾರೆನೊ [ಪ] ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ [ಅ.ಪ] ವಾರಿಚರ ಕೂರ್ಮನೆ ಧಾರುಣಿ ತಂದನೆತೋರ ಕೊರಳ ಹಾರ ವರಮೃಗರೂಪನೆ [೧] ಭೂದಾನವ ಬೇಡಿ ಮೇದಿನಿ ಪಾಲಕರ ಕೊಂದುಆ ದಶಾಸ್ಯನಳಿದ ಸೋದರ ಮಾವನ ವೈರಿ [೨] ಬೆತ್ತಲೆ ನಿಂತು ದುಷ್ಕೃತ್ಯ ಮಾಳ್ಪರ ಕೊಂದುಉತ್ತಮ ತುರಗವೇರಿದ ಭೃತ್ಯವತ್ಸಲ ದೇವ [೩] ವಿಜಯ ರಾಮಚಂದ್ರವಿಠ್ಠಲರಾಯನೆಸುಜನ ವಂದಿತ ನಿನ್ನ ಭಜನೆಯ ಪಾಲಿಸೊ [೪] bAro gOpinAtha ninnagaliralAreno [pa] vAre…

error: Content is protected !!