Krishna

  • Ranga Kolalanudalagi

    Composer : Shri Prasannavenkata dasaru ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು [ಪ]ಮಂಗಳಮಯವಾಯಿತು ಧರೆಜನಂಗಳು ಜೀವನ ಚೇತನ ಮರೆದುರಂಗ ಧ್ಯಾನಪರರಾದರು ||ಅ. ಪ|| ಬಾಡಿದ ಬಳ್ಳಿ ಮರ ಗೊನೆಯೊಡೆದಾವುತೀಡುವ ಮಂದಮಾರುತ ಕೂಡ ತೂಗಾಡುವ ವನದ ಫಲದಗೊಂಚಲದಿಪಾಡಲೊಲ್ಲವಳಿ ಕುಲಗಳುಹೇಡಿಗೊಂಡವು ಜಾಣಕ್ಕಿ ಗಿಳಿಯು ಮಾತಾಡದೆ ಕಳೆಗುಂದಿತು ಕೋಗಿಲಓಡಾಟ ವೈರಾಟ ಜರೆದು ಖಗಮೃಗಗಾಢ ನಿದ್ರೆಗೆ ವಶವಾದವೊ ||೧|| ಕೆಳಗಿನುದಕ ಉಕ್ಕೇರಿ ಬಂದವುತುಳುಕಿ ಚೆಲ್ಲಾಡಿ ನಿಂತಳು ಯಮುನೆಮ್ಯಾಲೆ ಮಾಡೊಡ್ಡಿ ಮೇಘಾಳಿ ಬೋರಿಟ್ಟವುಕಲ್ಲು ಕರಗಿ ನೀರಾದವೋನಳಿನ ಚಂಪಕ ನಾಗ ಪುನ್ನಾಗ ಪಾಟಾಲ ಶಾವಂತಿಗಿ ಕೂಡ…

  • Parijata – Dirgha kriti

    Composer : Shri Helavanakatte Giriyamma ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದಸಾರೆ ರುಗ್ಮಿಣಿ ಸಹಿತ ಆನಂದದಿಂದವಾರಿಜಾಂಬಕ ವಾಲಗದೊಳು ಚಂದನಾರಂದಮುನಿ ತಾ ಪಾರಿಜಾತವ ತಂದ (೧) ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದಪುಷ್ಪಯಾರಿಗೆ ಎಂದವಲ್ಲಭೆ ರುಗ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನುಬಲ್ಲದೆ ಇಂತೆಂದಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದುಕೇಳಿದಳಾಕೆ ನಿಂದುತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದುಮನದಲ್ಲಿ ಅತಿನೊಂದು (೧) ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನುಮಂದಗಮನೆಯ ಮುಡಿಗೆ ತಾ ಮುಡಿಸಿದನುಎಂದು ಎನ್ನೊಳು ಎರವು ಇಲ್ಲವು ಕಾಣಿಇಂದು ಮಾಡಿದ…

  • Hyangadaru enna

    Composer : Shri Pradyumna Teertharu ಹ್ಯಾಂಗಾದರು ಎನ್ನ ನೀನೆ ರಕ್ಷಿಸ ಬೇಕೋಸಾಗರ ಶಯನ ಕೃಷ್ಣಾ [ಪ]ಭಾಗವತರ ಸಂಗ ಬೇಗದಿಂದಲಿ ಇತ್ತುಹೋಗಲಾಡಿಸು ಭವವ ಶ್ರೀ ಕೃಷ್ಣ [ಅ.ಪ] ಬಾಲೇರ ಸಲುವಾಗಿ ಕೀಳು ಜನರಲ್ಲಿಶೀಲ ಜರಿದು ಯಾಚಿಸಿ,ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ [೧] ಅಂಗಜನಾಟಕೆ ಹಗಲಿರುಳೆನ್ನದೆ ಪರಅಂಗನೆಯರ ಕೂಡಿ,ಮಂಗಳ ಮಹಿಮ ತುರಂಗ ವದನ ದೇವಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ [೨] ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆಕಾರುಣ್ಯದಲಿ ಭಕ್ತನ,ಅರಿಷಟ್ಕರ ಕೊಂದು ಕರಿವರದನೆ…

error: Content is protected !!