-
Atana paduve anavarata
Composer : Shri Purandara dasaru ನಿನ್ನನೆ ಪಾಡುವೆ ನಿನ್ನನೆ ಪೊಗಳುವೆನಿನ್ನನೆ ಬೇಡಿ ಬೇಸರಿಸುವೆನಿನ್ನ ಕಾಲನು ಪಿಡಿವೆನಿನ್ನ ತೊಂಡರಿಗೆ ಕೈಗೊಡುವೆನಿನ್ನಂತೆ ಸಾಕಬಲ್ಲ ದೇವರಿನ್ನುಂಟೆಚೆನ್ನ ಪುರಂದರವಿಠಲ ದೇವರ ದೇವ || ಆತನ ಪಾಡುವೆ ಅನವರತ ಪ್ರೀತಿಯಿಂದಲಿತನ್ನ ಭಕುತರ ಸಲಹುವ ||ಪ|| ಆವಾತನ ಕೀರ್ತಿ ಪರೀಕ್ಷಿತ ಕೇಳಿಪಾವನನಾದನು ಮೂಜಗವರಿಯಭಾವಶುದ್ಧಿಯಲಿ ಶುಕನ್ಯಾರ ಪೊಗಳುವಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ (೧) ಶಿಲೆಯ ಬಾಲೆಯ ಮಾಡಿದ ಪಾದವ್ಯಾರದುನಳಿನ ಸಂಭವನ ಪೆತ್ತವನ್ಯಾರುಕಲಿಯುಗದಿ ಜನರಿಗೆ ಯಾರ ನಾಮವೆ ಗತಿಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ (೨) ದ್ರುಪದನ ಸುತೆಯಭಿಮಾನ ರಕ್ಷಕನ್ಯಾರುನೃಪ ಧರ್ಮಜಗೆ…
-
Halavu jeevanava ondele
Composer : Shri Kanakadasaru ಹಲವು ಜೀವನವ ಒಂದೆಲೆ ನುಂಗಿತು ||ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ|| ಪ || ಹರಿಯ ನುಂಗಿತು ಹರ ಬ್ರಹ್ಮರ ನುಂಗಿತುಸುರರಿಗುಂಟಾದ ದೇವರ ನುಂಗಿತುಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವಹರಿಯ ಬಳಗವ ಒಂದೆಲೆ ನುಂಗಿತು || ೧ || ಎಂಟು ಗಜವನು ನುಂಗಿ ಕಂಟಕರೈವರ ನುಂಗಿಉಂಟಾದ ಗಿರಿಯ ತಲೆಯ ನುಂಗಿತುಕಂಟವ ಪಿಡಿದು ಬ್ರಹ್ಮನ ನುಂಗಿತೆಲೊ ದೇವಎಂಟಾರು ಲೋಕ ಒಂದೆಲೆ ನುಂಗಿತು || ೨ || ಗಿಡವ ನುಂಗಿತು ಗಿಡದೊಡತೊತ್ತಿಯನು ನುಂಗಿತುಗಿಡುವಿನ ತಾಯಿ ತಂದೆಯ…
-
Onde koogalate
Composer : Shri Purandara dasaru ಒಂದೇ ಕೂಗಳತೆ ಭೂ ವೈಕುಂಠ || ಪ ||ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ || ಅಂಬರೀಷನು ದ್ವಾದಶಿವ್ರತವ ಮಾಡಲುಡೊಂಬೆಯ ಮಾಡಿದ ದುರ್ವಾಸನುಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು || ೧ || ಕರಿರಾಜ ವನದಲಿ ಉಳುಹೆಂದು ಕೂಗಲುತ್ವರದಿಂದಲಿ ಬಂದು ಕಾಯ್ದು ತಾನುಕರುಣಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿಂ ಬಂದುದು || ೨ || ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಿ ಅಕ್ಷಯವಿತ್ತನುಕಪಟನಾಟಕ ಕೃಷ್ಣ ಪುರಂದರವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ ||…
