-
Onde koogalate
Composer : Shri Purandara dasaru ಒಂದೇ ಕೂಗಳತೆ ಭೂ ವೈಕುಂಠ || ಪ ||ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ || ಅಂಬರೀಷನು ದ್ವಾದಶಿವ್ರತವ ಮಾಡಲುಡೊಂಬೆಯ ಮಾಡಿದ ದುರ್ವಾಸನುಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು || ೧ || ಕರಿರಾಜ ವನದಲಿ ಉಳುಹೆಂದು ಕೂಗಲುತ್ವರದಿಂದಲಿ ಬಂದು ಕಾಯ್ದು ತಾನುಕರುಣಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿಂ ಬಂದುದು || ೨ || ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಿ ಅಕ್ಷಯವಿತ್ತನುಕಪಟನಾಟಕ ಕೃಷ್ಣ ಪುರಂದರವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ ||…
