Haridasa seva

  • Onde koogalate

    Composer : Shri Purandara dasaru ಒಂದೇ ಕೂಗಳತೆ ಭೂ ವೈಕುಂಠ || ಪ ||ಸಂದೇಹವಿಲ್ಲವು ಸಾಧು ಸಜ್ಜನರಿಗೆ || ಅ.ಪ || ಅಂಬರೀಷನು ದ್ವಾದಶಿವ್ರತವ ಮಾಡಲುಡೊಂಬೆಯ ಮಾಡಿದ ದುರ್ವಾಸನುಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು || ೧ || ಕರಿರಾಜ ವನದಲಿ ಉಳುಹೆಂದು ಕೂಗಲುತ್ವರದಿಂದಲಿ ಬಂದು ಕಾಯ್ದು ತಾನುಕರುಣಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿಂ ಬಂದುದು || ೨ || ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಿ ಅಕ್ಷಯವಿತ್ತನುಕಪಟನಾಟಕ ಕೃಷ್ಣ ಪುರಂದರವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ ||…

    , ,
  • Hari chitta Satya

    Composer : Shri Purandara dasaru ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾನಮ್ಮ ನರಚಿತ್ತಕ್ಕೆ ಬಂದದ್ದು,ಲವಲೇಶ ನಡೆಯದು [ಪ] ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತಮದುವ್ಯಾಗದಿರುವುದು ಹರಿ ಚಿತ್ತವಯ್ಯ (೧) ಕುದುರೆ ಅಂದಣ ಆನೆ ಬಯಸೋದು ನರಚಿತ್ತಪದಚಾರಿಯಾಗೋದು ಹರಿ ಚಿತ್ತವಯ್ಯ (೨) ವಿಧವಿಧ ಯಾತ್ರೆಯ ಬಯಸೋದು ನರಚಿತ್ತಒದಗಿ ಬರುವ ರೋಗ ಹರಿ ಚಿತ್ತವಯ್ಯ (೩) ಸದಾ ಅನ್ನದಾನವ ಬಯಸೋದು ನರಚಿತ್ತಉದರಕ್ಕೆ ಅಳುವುದು ಹರಿ ಚಿತ್ತವಯ್ಯ (೪) ಧರಣಿಯ ಆಳಬೇಕೆಂಬುದು ನರಚಿತ್ತಪರರ ಸೇವಿಸುವುದು ಹರಿ ಚಿತ್ತವಯ್ಯ (೫) ಪುರಂದರ ವಿಠಲನ…

    ,
  • Indu sairisiri

    Composer : Shri Kanakadasaru ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪಮುಂದಕೆ ನಿಮ್ಮ ಮನೆಗೆ ಬಾರನಮ್ಮ |ಪ| ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು |ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ ||೧|| ಹಸು ಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿ |ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆನಿಮ್ಮ ಹಸು ಮಗುವಿನಂತೆ ಭಾವಿಸಬಾರದೆ ||೨|| ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಡುವ |ಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ ||೩|| iMdu…

    , ,

error: Content is protected !!