-
Ele manave Hari
Composer : Shri Purandara dasaru ಎಲೆ ಮನವೇ ಹರಿ ಧ್ಯಾನವ ಮಾಡು [ಪ] ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ [೧] ಎಲೆ ನೇತ್ರಗಳಿರ ಶ್ರೀ ಕೃಷ್ಣ ಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ |ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸುವುದ್ ಅನುದಿನವು [೨] ಎಲೆ ಶಿರವೆ ನೀ ಕೇಳ್ ಅಧೋಕ್ಷಜನ…
-
Bhalire Bhalire Narasimha
Composer : Shri Vijayadasaru ಭಳಿರೆ ಭಳಿರೆ ನಾರಸಿಂಹ ಮಹಸಿಂಹ,ಮಲಮಲಮಲತವರ ವೈರಿ ಉರಿಮಾರೀ [ಪ] ನಗನಗನಗಳಲ್ಲಾಡೆ ಚತುರ್ದಶ,ಜಗಜಗಜಗವೆಲ್ಲ ಕಂಪಿಸಿ ಕೆಂಪಾಗೆ,ಹಗೆಹಗೆಹಗೆ ಬಲವ ದೆಶೆ ಗೆಡಿಸಿ ರೋಷಗಿಡಿ,ಉಗುಉಗುಉಗುಳುತ್ತ ಬಂದ ನರಸಿಂಹ [೧] ಬಿಗಿಬಿಗಿಬಿಗಿಬಿಗಿದು ಹುಬ್ಬು ಗಂಟನೆ ಹಾಕಿ,ಹೊಗೆಹೊಗೆಹೊಗೆಸುತ್ತೆ ಸರ್ವರಂಜಿನೆಗೆನೆಗೆನೆಗೆನೆಗೆದು ಕುಪ್ಪಳಿಸಿ ಅಸುರನ್ನ,ಮಗುಮಗುಮಗು ಬೇಡಿಕೊಂಡ ನರಸಿಂಹ [೨] ಉಗುಉಗುಉಗುರಿಂದ ಕ್ರೂರನ್ನ ಹೇರೊಡಲ,ಬಗೆಬಗೆಬಗೆಬಗೆದು ರಕುತ ವನ್ನು,ಉಗಿಉಗಿಉಗಿಉಗಿದು ಚೆಲ್ಲಿ ಕೊರಳಿಗೆ ಕರುಳ,ತೆಗೆತೆಗೆತೆಗೆದಿಟ್ಟ ನಾರಸಿಂಹ [೩] ಯುಗಯುಗಯುಗದೊಳಗೆ ಪ್ರಣತಾರ್ತಿಹರನೆಂದು,ಝಗಝಗಝಗಝಗಿಪ ಮುಕುಟ ತೂಗೇ,ನಗುನಗುನಗುನಗುತ ಸುರರು ಗಗಗನದಿ ನೆರೆದು,ಮಿಗಿಮಿಗಿಮಿಗಿಲೆನೆ ನಾರಸಿಂಹ [೪] ಒಂದೊಂದೊಂದೊಂದೊಂದು ಮುನಿಗಳಿಗೆ ಒಲಿದು,ಅಂದಂದಂದಂದದಿಗಾಯ ತಾ…
-
Enu Karana Baya
Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ, ಪ್ರಹ್ಲಾದವರದನರಸಿಂಹ ನರಸಿಂಹ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮಲೆತು ಮಾವನ ಕೊಂದು ನಿಂತೆ,ಇಂಥಾ ಭೂಮಿಗಿಳಿದನಾರಸಿಂಹ ನರಸಿಂಹ || ೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ…
