Purandara dasaru

  • Gangadi sakala

    Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ ಗಟ್ಟಿ ಕಾಣಿರೋಹರಿಯ ನಾಮಾ.. ||೨|| ಸ್ನಾನಸಂಧ್ಯಾವಂದನೆ ಮಾಡದವಗೆಹರಿಯ ನಾಮಜ್ಞಾನವು ಇಲ್ಲದ ಮೂಢಾತ್ಮ ಜನರಿಗೆಹರಿಯ ನಾಮ ||೩|| ದಾನಧರ್ಮಕನುಕೂಲ-ವಿಲ್ಲದವಗೆಹರಿಯ ನಾಮಮಾನುಷ ಜನುಮ ಸಫಲ ಮಾಡುವುದೀಹರಿಯನಾಮ ||೪|| ವ್ಯಾಳ ವ್ಯಾಳಕೆ ಎಚ್ಚರಿಕೆಯ ಕೊಡುವುದುಹರಿಯನಾಮಜಾಳಿಗೆ ಹೊಣ್ಣು ತುಂಬಿಟ್ಟಂತೆ ಕಾಣಿರೊಹರಿಯ ನಾಮ ||೫|| ಕಾಲನ ದೂತರಿಗಳುಕಿಸದಿಪ್ಪದುಹರಿಯ ನಾಮಲೋಲ…

  • Anugalavu chinte

    Composer : Shri Purandara dasaru ಅನುಗಾಲವು ಚಿಂತೆ ಜೀವಕ್ಕೆ |ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆಮತಿಹೀನ ಸತಿಯಾದರು ಚಿಂತೆಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆಮಿತಿಮೀರಿದ ಮೋಹದ ಚಿಂತೆ |೧| ಮಕ್ಕಳ್ಳಿದರು ಚಿಂತೆ ಮಕ್ಕಳಿಲ್ಲದ ಚಿಂತೆ ,ಅತ್ತು ಹಾಲ್ ಕಾಡುವ ಚಿಂತೆಯುತುತ್ತಿನ ಆಸೆಗೆ ತುರುಗಳ ಕಾಯ್ದರುಕಕ್ಕುಲತೆಯ ಬಿಟ್ಟು ಹೋಗದ ಚಿಂತೆ |೨| ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆಹಿಡಿಹೊನ್ನು ಕೈಯೊಳಿದ್ದರು ಚಿಂತೆಯುಪೊಡವಿಯೊಳಗೆ ಸಿರಿ ಪುರಂದರವಿಠಲನಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ |೩| anugAlavu…

  • Satya jagatidu pancha bhedavu

    Composer : Shri Purandara dasaru Expln by Shri Kesava Rao Tadipatri ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ [ಪ] ಜೀವ ಈಶಗೆ ಭೇದ ಸರ್ವತ್ರಜೀವ ಜೀವಕೆ ಭೇದವುಜೀವ ಜಡ ಜಡ ಜಡಕೆ ಭೇದಜೀವ ಜಡ ಪರಮಾತ್ಮಗೆ [೧] ಮಾನುಷೋತ್ತಮಗಧಿಕ ಕ್ಷಿತಿಪರುಮನುಜ ದೇವ ಗಂಧರ್ವರುಜ್ಞಾನಿ ಪಿತ ಅಜಾನಜ ಕರ್ಮಜದಾನವಾರಿ ಸತ್ವಾತ್ಮರು [೨] ಗಣಪ ಮಿತ್ರರು ಸಪ್ತ ಋಷಿಗಳುವಹ್ನಿ ನಾರದ ವರುಣನುಇನಜಗೆ ಸಮ ಸೂರ್ಯ ಚಂದ್ರರುಮನುಸತಿಯು ಹೆಚ್ಚು…

error: Content is protected !!