-
Pranava pratipadya
Composer : Shri Jagannatha dasaru ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ |ಪ|ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು |ಅ.ಪ| ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದುಅಕಳಂಕ ನಾಮರೂಪದಲಿ ಕರೆಸಿಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ (೧) ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನಅಧೀನರಲ್ಲವೆ ತತ್ವಮಾನಿ ಸುರರುದಾನವಾಂತಕನೆ ವಿಜ್ಞಾಪನೆಯ ಕೈಗೊಂಡುದೀನರುದ್ಧರಿಸುವುದು ದಯದಿಂದ ನಿರುತಾ (೨) ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳಗಿದ್ದು ಬಹುವಿಧ ಚೇಷ್ಟೆಗಳನೆ ಮಾಳ್ಪೆಬದ್ಧರನ ಮಾಳ್ಪೆ ಭವದೊಳಗೆ ಜೀವರನು ಅನಿರುದ್ಧನೆಂದೆನಿಸಿ ಸರ್ವರೊಳು ವ್ಯಾಪಕನಾಗಿ (೩) ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆನೊವಿಭೀಷಣಗೆ…
-
Rama kathamruta
Composer : Shri Jagannatha dasaru ರಾಮಕಥಾಮೃತ ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ ||೧|| ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ ||೨|| ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದುವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ||೩|| ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದುಶಶಿಮುಖಿ ಜಾನಕಿಯ ಕರವ ಪಿಡಿದು ||೪|| ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿದಶರಥಗೆ ಏಕೀಭಾವವನೆ ತೋರಿ ||೫|| ಪರಮ ಹರುಷದಲಿ ಸಾಕೇತನಗರಿಗೆ ಬಂದುಕಿರಿಯ ಮಾತೆಯ ಕಠಿಣ ನುಡಿ ಕೇಳಿ ||೬|| ಚಿತ್ರಕೂಟಕೆ…
-
Mangalam – Dayadi Bhaktara
Composer : Shri Jagannatha dasaru ರಾಗ: ಆನಂದಭೈರವಿ , ರೂಪಕತಾಳ ಜಯಮಂಗಳಂ ನಿತ್ಯ ಶುಭಮಂಗಳಂ ।ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥ ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।ಪ್ಲವಗನಾಯಕರಾಳ್ದ ರವಿಜನುತಗೆ ॥ಶಿವನ ವರ ಪಡದಕ್ಷಕುವರ ಮುಖ ರಕ್ಕಸರ ।ಬವರ ಮುಖದಲಿ ಸದೆದ ಪ್ರವಿತತನಿಗೆ ॥ 1 ॥ ಪಾವಮಾನಿಯ ಹೆಗಲನೇರಿ ಅತಿ ಹರುಷದಲಿ ।ರಾವಣಾದ್ಯರ ಸದೆದ ರಘುರಾಮಗೆ ॥ಭಾವಿಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು – ।ಗ್ರೀವಾದಿಗಳಿಗೆ ಮುಕ್ತಿಯ ನೀಡ್ದಗೆ ॥ 2 ॥…
