Author: Daasa

  • Vijayamooruti poreyo

    Composer : Shri Kamalesha vittala ವಿಜಯಮೂರುತಿ ಪೊರೆಯೋ ವಿಜಯೀಂದ್ರ ಯತಿವರ್ಯವಿಜಯನಗರೇಶನುತ ಪಾದಪಂಕಜನೇ [ಪ]ಕಾವೇರಿ ತಟ ನಿಕಟ ಕುಂಭಕೋಣಾವಾಸಿಶೈವಯತಿ ಮತ್ತೇಭ ಪಂಚಾನನ [ಅ.ಪ] ಪರಮಗುರು ಶ್ರೀಮದಾನಂದತೀರ್ಥೋದ್ಯಾನಪರಶಾಸ್ತ್ರವೆಂಬ ಸತಾರಸದಿ ವಿಹರಿಸುಪರಮಹಂಸನೇ ಯಮ್ಮ ಪರಿಕಿಸದಲನವರತಪರವಾದಿಜಯವೀಯೋ ನರಹರಿಯ ಪ್ರಿಯನೇ [೧] ಹತ್ತ ಹತ್ತು ನಾಲ್ಕು ಸತಿಗಳನು ವಿರಚಿಸಿಮಿಥ್ಯವಾದವ ಮುರಿದ ಸತ್ಯಶೀಲ ಯತೀಂದ್ರಮತ್ತ ಕಾಶಿನಿಯರಂ ಕಣ್ಣೆತ್ತಿ ನೋಡದಲೆಚಿತ್ತೇಶನಂ ಗೆಲಿದೆ ಸುತ್ತಲೂ ಕಾಯೆಮ್ಮ [೨] ಪಂಥವನು ತೊಟ್ಟು ಅಪ್ಪಯ್ಯದೀಕ್ಷಿತರೆಂಬಮತ್ತವಾದಿಯ ಜಯಿಸಿ ಮಧ್ವಮತ ರಕ್ಷಿಸಿದೆಪತಿತ ಪಾವನ ನಮ್ಮ ಕಮಲೇಶನಂಘ್ರಿಯನುನುತಿಸುತ್ತಲನವರತ ಭಕುತರನು ಪೊರೆಯುತಿಹೆ [೩] vijayamUruti poreyO…

  • Smarisidavaranu kayva

    Composer : Shri Shripadarajaru ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವಸುರ ಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ|| ವೈಕುಂಠದಿಂದ ಬಂದು ಶೇಷಾಚಲದಲಿ ನಿಂದುಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧುಭಕುತಿ ಮುಕುತಿಯೀವ ಮತ್ಕುಲದೇವನೆಸಕಲ ಜನಸೇವಿತ ಘನ ಪರಿಪೂರ್ಣನೆವಿಕಸಿತ ಕಮಲನಯನ ಕಂಜನಾಭನೆಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧|| ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆಆನಂದಮಯನೆ ಅನೇಕಾವತಾರನೆಅನುದಿನ ನೆನೆವರ ಹೃದಯ ಮಂದಿರನೆಘನಮಾಣಿಕ ಭೂಷಣ ಶೃಂಗಾರನೆತನುವಿನ ಕ್ಲೇಶ ದುರಿತ ಸಂಹರನೆ ||೨|| ಜಯತು ದೋಷ ವಿನಾಷ ಜಯ…

  • Krishnamurti kanna

    Composer : Shri Purandara dasaru ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂದೆಸೆವ ಲಲಾಟಶಿಸ್ತಿಲಿ ಕೊಳಲನೂದುವ ಓರೆ ನೋಟಕೌಸ್ತುಭ ಎಡಬಲದಲಿ ಓಲಾಟ || ೧|| ಮಘಮಘಿಸುವ ಸೊಬಗಿನ ಸುಳಿಗುರುಳುಚಿಗುರು ತುಳಸಿ ವನಮಾಲೆಯ ಕೊರಳುಬಗೆ ಬಗೆ ಹೊನ್ನುಂಗುರವಿಟ್ಟ ಬೆರಳುಸೊಬಗಿನ ನಾಭಿಯ ತಾವರೆ ಯರಳು ||೨|| ಉಡುದಾರ ವಡ್ಡ್ಯಾಣ ನಿಖಿಲಾಭರಣಉಡುಗೆ ಪೀತಾಂಬರ ರವಿಶತ ಕಿರಣಕಡಗ ನೂಪುರ ಗೆಜ್ಜೆಗಳನಿಟ್ಟ ಚರಣಒಡೆಯ ಶ್ರೀಪುರಂದರ ವಿಠಲನ ಕರುಣ ||…

error: Content is protected !!