-
Palisayya Gopalaraya
Composer : Shri Shyamasundara dasaru ಪಾಲಿಸಯ್ಯಾ ಗೋಪಾಲರಾಯಾ |ಶೀಲ ಭಕುತಿ ಜ್ಞಾನವ ನಿತ್ಯ |ಸಲಿಸುತ ಪ್ರಸನ್ನನಾಗಿ || ಪ || ಓಡಿಸಿ ವಿಘ್ನವ ನೀಡು ವೈರಾಗ್ಯವ |ಬೇಡುವೆ ನಾ ಕೃಪೆ ಮಾಡಿ ಗತಿ || ೧ || ಆರ್ತರಭೀಷ್ಟೆಯ ಪೂರ್ತಿಪ ದಾನಿ |ಪ್ರಾರ್ಥಿಸುವೆ ಶುಭಮೂರ್ತಿ ಸದಾ || ೨ || ಶ್ಯಾಮ ಸುಂದರನೆ ಸ್ವಾಮಿಯು ನಿಜವೆಂದು |ಆ ಮೌನಿಯ ಘನ ಪ್ರೇಮಾನ್ವಿತ || ೩ || pAlisayyA gOpAlarAyA |SIla Bakuti j~jAnava nitya |salisuta…
-
Anugalavu chinte
Composer : Shri Purandara dasaru ಅನುಗಾಲವು ಚಿಂತೆ ಜೀವಕ್ಕೆ |ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆಮತಿಹೀನ ಸತಿಯಾದರು ಚಿಂತೆಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆಮಿತಿಮೀರಿದ ಮೋಹದ ಚಿಂತೆ |೧| ಮಕ್ಕಳ್ಳಿದರು ಚಿಂತೆ ಮಕ್ಕಳಿಲ್ಲದ ಚಿಂತೆ ,ಅತ್ತು ಹಾಲ್ ಕಾಡುವ ಚಿಂತೆಯುತುತ್ತಿನ ಆಸೆಗೆ ತುರುಗಳ ಕಾಯ್ದರುಕಕ್ಕುಲತೆಯ ಬಿಟ್ಟು ಹೋಗದ ಚಿಂತೆ |೨| ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆಹಿಡಿಹೊನ್ನು ಕೈಯೊಳಿದ್ದರು ಚಿಂತೆಯುಪೊಡವಿಯೊಳಗೆ ಸಿರಿ ಪುರಂದರವಿಠಲನಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ |೩| anugAlavu…
-
Elamma kolhapuradheeshe
Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕುಮುಕುತಿ ಯೋಗ್ಯರ ಸೇವೆ ಕೊಳ್ಳಬೇಕುಸಕಲರೂಪದಲಿ ಶ್ರೀಹರಿಯ ಸೇವಿಸಬೇಕುಅಕಳಂಕ ಆದಿದೇವತೆ ಎನಿಸಬೇಕು ||2|| ಶ್ರೀ ಪದ್ಮಭವೆ ವೆಂಕಟೇಶನ ಕೂಡುತನೀ ಪರಿಪರಿ ಲೀಲೆಗೈಯ್ಯಬೇಕುಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳವ್ಯಾಪಿಸಿ ಭಕ್ತರ ಕಾಪಾಡಬೇಕು ||3|| ELamma kolhaapuradheeSe | innoobhaaLa hottaayitu vaikuMThavaase ||pa|| sRuShTiseMdenuta aaMbraNi…
