-
Charana kamalavannu
Composer : Shri Gopaladasaru ಚರಣ ಕಮಲವನ್ನು ನೆನೆವೆ ನಾ | ಗುರುಚರಣ ಕಮಲವನ್ನು ನೆನೆವೆ ನಾ || ಪ || ಚರಣ ಕಮಲವನ್ನು ನೆನೆದು ನೆನೆದು | ಹರಿಚರಣ ಕಮಲವ ಅರ್ಚಿಸುವೆ ನಾ || ಅ ಪ || ಸುರದ್ವಿಜ ವೇಷದಿಂದಲಿ ತನ್ನ | ತ್ರೀಣಿಸುರಗಂಗೆಯನ್ನು ಸೇವಿಸಿದನ್ನ ||ಸುರಮುನಿಯಿಂದುಪದೇಶನ್ನ | ಭೂಸುರರ ಕರುಣ ಸಂಪಾದಿಸುವನ್ನ || ೧ || ಪರಮತಗಳನ್ನು ಖಂಡಿಸಿದನ್ನ | ಸತ್ಯಹರಿಪರನೆಂದು ಸ್ಥಾಪಿಸಿದನ್ನ ||ಪರತತ್ವವನ್ನು ಅರುಪಿದನ್ನ | ತನ್ನವರ ಗುರುಮಧ್ವಮತ ಪೊಂದಿದಾತನ್ನ ||…
-
GurugaLa manadi kandu
Composer : Shri Modalkal Sheshadasaru ಗುರುಗಳ ಮನದಿ ಕಂಡು ಧನ್ಯನಾದೆ |ಸಿರಿ ಅರಸನಾ ದಾಸರು ವಿಜಯರಾಯರು ||ಪ|| ಶ್ಯಾಮಸುಂದರ ಕಾಯ ನಾಮ ದ್ವಾದಶ ಮುದ್ರೆ |ವಾಮನ ರೂಪವ ಧರಿಸಿ ಕೋಮಲ ತುಳಸಿಯು |ಕಮಲಾಕ್ಷಿ ಮಣಿಗಳಿಂದ ವಿಮಲ ಚಿತ್ತದಿ |ಕಾಮನಯ್ಯನ ಸಾಮಗಾನದಿ ಪೊಗಳುವ ||೧|| ಹಿಂದೆ ಪುರಂದರದಾಸರ ಕಂದನಾಗಿ ಪುಟ್ಟಿ |ತಂದೆ ವಾಕ್ಯವ ತಾಳಿ ಇಂದು ಧರಿಗೆ ಬಂದುಇಂದಿರೇಶನ ಚರಿತ್ರೆಯು ಕುಂದದಲೆ ಬೀರಿ |ಮಂದ ಮತಿಗಳಿಗೆ ಮಂದರಧರನ ತೋರಿದ ||೨|| ಗುರುಗಳ ಹೃದಯವಾಸ ಗುರುವಿಜಯವಿಠ್ಠಲನ |ಸಿರಿ ಪಾದ…
-
Parama harushavayitu
Composer : Shri Mohana dasaru ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ||ಪ|| ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ||ಅ.ಪ|| ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ |ಧೇನಿಸಿ ಅರಸಲಾಕ್ಷಣ-ದೊಳಗವಳ ವತ್ಸತಾನು ಕೂಗಲುಕಾಮಧೇನು ಒದಗಿದಂತೆ ||೧|| ತರಣಿಯ ಕಿರಣದಿಂದ ತಪಿಸಿನೆರಬಾಯ ಬಿಡುವುತ ಬಪ್ಪರನ |ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆದಿವ್ಯ ಸರಸಿಯನಿತ್ತಂತೆ ||೨|| ಧನವ ಪೋಗಾಡಿ ಕೊಂಡು ನರನುಬಲುಮನ ಕ್ಲೇಶದಿಂದಿರಲು |ಘನ ಮಹಿಮನೆ ನಮ್ಮ ಮೋಹನವಿಠಲ-ವನ ಕೈಯ್ಯೊಳಗಚಿಂತಾಮಣಿಯನಿತ್ತಂತೆ ||೩|| parama haruShavAyitu…
