-
Nalidade enna nalige
Composer : Shri Shripadarajaru ನಲಿದಾಡೆ ಎನ್ನ ನಾಲಿಗೆ ಮ್ಯಾಲೆ, ಶಾರದಾ ದೇವಿಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ |ಪ| ಘಿಲು ಘಿಲು ಘಿಲು ಗೆಜ್ಜೆಯ ನಾದಹೊಳೆವ ಅಂದುಗೆ,ರುಳಿ ಪೈಜಣವಿಟ್ಟ ಪುಟ್ಟ ಪಾದಸುರವರನುತ ಪಾದ,ಸರಸಿಜೋದ್ಭವನ ವದನ ನಿಲಯಳೇ ,ಕರುಣದಿಂದ ಪರಿಪಾಲಿಸು ಮಾತೇ (೧) ನಸುನಗೆ ಮುಖವು ನಾಸಾಭರಣಾಯೆಸೆವ ಕಪೋಲ ,ಹೊಸ ಮುತ್ತಿನ ಚಲು ತುಂಬಿಟ್ಟ ಶ್ರವಣತಿಲಕವು ಹಸನ,ಶಶಿ ಸೂರ್ಯರ ಆಭರಣ ಶೊಭಿತಳೆ,ಕುಸುಮ ಮುಡಿದ ಮೂರ್ಧ್ವಜ ವುಳ್ಳವಳೆ (೨) ಶೃಂಗಾರವಾದ ಜಡೆ ಭಂಗಾರರಾಗುಟಿ ಚೌರಿ ,ಹೊಂಗ್ಯಾದಿಗೆ ಮುತ್ತಿನ ಹಾರರಂಗು ಮನೊಹರಾ,ಮಂದಗಮನೆ…
-
Kaada beladingalu
Composer : Shri Shripadarajaru ನೀ ಕರುಣಿ ಎಂದು ನಿನ್ನ ನಾ ಮೊರೆ ಹೊಕ್ಕೆನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯನಿನ್ನವನೆಂಬೆ ನಾನು ಮತ್ತಂಯವ ನರಿಯೆನೊನಿನ್ನವನೆಂಬೆ ನಾನುಕಂದರ್ಪನೆಂದೆಂದು ಕಾಡದಂತೆ ಮಾಡೊವೃಂದಾರಕಾಧೀಶ ರಂಗವಿಠಲ || ಕಾಡ ಬೆಳದಿಂಗಳು ಈ ಸಂಸಾರಕತ್ತಲೆ ಬೆಳದಿಂಗಳು |ಪ| ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಧ ಭಾಂಡಾರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ |೧| ಪುಂಡರೀಕಾಕ್ಷ ಪುರುಷೋತ್ತಮ ಹರಿಯುಬಂಡಿಬೋವನಾದ ಪಾರ್ಥನಿಗೆ ಭೂಮಂಡಲವನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯಿದನು ಹೊಲೆಯನಾಳಾಗಿ |೨| ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಂದು ಬಾಗಿಲ ಕಾಯ್ವರುಉಂಟಾದತನ…
-
Durita gaja panchanana
Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆಬಂಧನ ಬಿಡಿಸೆನ್ನ ತಂದೆ ಗೋವಿಂದ ||೨|| ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ಓಲೈಸಲ್ಯಾಕೆ ಗೋವಿಂದ ||೪|| ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫|| ಅರಸು ಮುಟ್ಟಲು…
