Bhagavata

  • Gopigeeta – Prasannavenkata dasaru

    ಶ್ರೀ ಪ್ರಸನ್ನ ವೇಂಕಟದಾಸಾರ್ಯಕೃತ ಕನ್ನಡ ಗೋಪೀಗೀತ ಜಯವ್ರಜಕ್ಕೆ ನೀ ಜನ್ಮಸೆಧಿಕವು |ಶ್ರೀಯಳವಾಸವೂ ಶಾಶ್ವತಿಲ್ಲಿಯು ||ಪ್ರಿಯಗೆ ಪ್ರಾಣವ ಅರ್ಪಸಿ ನೋಡುವ |ಪ್ರಿಯರ ದೃಷ್ಟಿಗೆ ಪ್ರಾಪ್ತಿಯಾ ಗದೆ || ೧ || ಸ್ವಜನ ವಿಸ್ಮಯಾ ಸ್ಮಿತದಲಳಿದೆಯೋ |ವ್ರಜದ ದುಃಖವನ್ನೊದ್ದ ವೀರನೆ ||ಭಜಿಪ ಕಿಂಕರೀರ್ಬಾಸಖಾ ಹರೇ |ಅಂಬುಜಸಮಾಸ್ಯವಾ ಅಕ್ಷಿಗೆ ತೋರ್ವನೇ || ೨ || ಶರತ ಕಾಲದ ಸ್ವಬ್ಜಗರ್ಭದ |ಸಿರಿಗೆ ಪೋಲುವಾಸ್ಯೇಕ್ಷೆ ಒಪ್ಪುವ ||ಸುರತಸ್ವಾಮಿ ನೀಂ ಶುಲ್ಕದಾಸೇರಂ |ವರದ ಕಾಯದೇ ವಿಧಿಯದಾವುದೈ || ೩ || ವಿಷದ ನೀರ್ದೊರೆ ವ್ಯಾಳರಾಕ್ಷರಿಂ |ವಿಷಮ…

  • Bhrunga ninnattidane – Bhramara geete

    Composer : Shri Shripadarajaru ಭೃಂಗಾ ನಿನ್ನಟ್ಟಿದನೇ ಶ್ರೀರಂಗಮಧುರೆಲಿ ನಿಂದು,ಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ [ಪ] ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಿಹನೇನೋಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾ |ಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದುತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿನಡುನೀರೊಳು ತೊರೆದ್ಹೋದನೆ ಹೇ ಕಿತವಾ (೧) ತಮ್ಮ ನಂದಗೋಪ ಯಶೋದಮ್ಮನ ಕಂಡು ಬಾರೆಂದುರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆ…

  • Naale baruvenendu

    Composer : Shri Gopaladasaru ನಾಳೆ ಬರುವೆನೆಂದು ಹೇಳಿ ಮಧುರೆಗೆಪೋಗಿ ಬಹಳ ದಿನವಾಯಿತಲ್ಲೊ ಉದ್ಧವ [ಪ] ಕೇಳಿದ್ಯಾ ನೀ ಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಉದ್ಧವ [ಅ.ಪ] ಪಳ್ಳಿವಾಸಿಗಳ್ ನಾವು ಪರಿಪರಿ ಅಲಂಕರಿಸಿಒಲಿಸಿಕೊಂಬುದನರಿಯೆವೊ ಉದ್ಧವ |ಗೊಲ್ಲ ಸತಿಯರು ಸದಾ ಗೋರಕ್ಷಕರುಮೈಯೆಲ್ಲ ತೊಳೆಯಲರಿಯೆವೊ ಉದ್ಧವ |ಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯ-ನೆಲ್ಲ ತಿಳುಹಿಸಿಕೊಂಡೆವೊ ಉದ್ಧವ |ಚಲ್ಲೆಗಂಗಳ ಚಪಲೆಯರು ಮಧುರೆನಾರಿಯರ ಒಲುವಿಗೆ ನಾವೆದುರೇನೊ ಉದ್ಧವ |೧| ಚೊಕ್ಕನಾದ ನಿತ್ಯ ತೃಪ್ತನಿಗೆ ಬೆಣ್ಣೆಕಳವಿಕ್ಕಿದೆವಲ್ಲವೊ ಉದ್ಧವ |ಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆಸೊಕ್ಕಿನುಕ್ತಿಯ ನುಡಿದೆವೊ ಉದ್ಧವ |ಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆದಕ್ಕಿದನು ಎಂತಿದ್ದೆವೊ…

error: Content is protected !!