Author: Daasa

  • Bidade Nimmanu poojisuva

    Composer : Shri Vyasarajaru ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ [ಪ]ತಡೆಯದೆ ವೈಕುಂಠವಹುದು ಸೋಜಿಗವೆ [ಅ.ಪ.] ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ [೧] ಷಡುರಸಾಯನದೂಟ ರಚಿಸಿರಲು ಕುರುಪತಿಯುಬಡವಿದುರನ ಮನೆಯ ಕುಡುತೆ ಪಾಲ್ಕುಡಿದುಪೊಡವಿಯ ಮೆಟ್ಟಿ ಪಾಪಿಷ್ಠನ ಕೆಡಹಿದೆಬಡವರಾಧಾರಿಯೆಂಬ ಬಿರುದನು ಪಡೆದೆ [೨] ಕಡಲ ಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿಒಡನೆ ಅವಳನು ಸುರೂಪಿಯ ಮಾಡಿದೆಸಡಗರದಿ ಅನವರತ ಬಿಡದೆ ಪೂಜಿಸುವಂಥದೃಢ ಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ [೩] biDade nimmanu…

  • Esalugangala Kanti

    Composer : Shri Vyasarajaru ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ [ಪ]ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು [ಅ.ಪ] ಹಾಲಕೊಂಡೀರೆಂದು ಸಾರಿದಡಾಬಾಲೆ ಕೇರಿ ಕೇರಿಯ ಒಳಗೆಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆಕೇಳಿದ್ದು ಕೊಡುವೆನೆಂದ (೧) ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣುಸನ್ನೆಯ ಮಾಡಿ ನಿನ್ನ ಮೋಹಿಪೆನೆನ್ನಲು (೨) ಕೆಟ್ಟೆ ಕೆಟ್ಟೆನೊ ಕೃಷ್ಣಇತ್ತಲೇತಕೆ ಬಂದೆ ಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರುನಿನ್ನ ಮುಟ್ಟದಿರೆಂದಳಾಕೆ (೩) ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ್ಯ…

  • Rangayya manege bandane

    Composer : Shri Vyasarajaru ರಂಗಯ್ಯ ಮನೆಗೆ ಬಂದನೆ ಅಂತ-ರಂಗದಿ ಗುಡಿ ಕಟ್ಟಿ ಕುಣಿವೆ ನಾ | ಪ | ಬಿಸಿಲು ಬೆಳದಿಂಗಳಾಯಿತು, ತಾ-ಮಸ ಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದಿರೆ ಅಲ್ಲಿ ವಿಷಹೋಗಿ ಅಮೃತವಾಯಿತು ನೋಡ |೧| ಹಾವು ನ್ಯಾವಳವಾಯಿತು ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆಯಾಯಿತು ನಮ್ಮದೇವಕಿ ಸುತನು ಬಂದರೆ ನೋಡ |೨| ಜಾಣೇಯರರಸ ನೊಡು ರಂಗನು ತಾನಾಗಿಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನಗಳಿಗೆ ಶ್ರೀಕೃಷ್ಣ ನೋಡ |೩| raMgayya manege baMdane aMta-raMgadi guDi kaTTi kuNive…

error: Content is protected !!