-
Annadaana mahima prakarana suladi – Vijayadasaru
ಅನ್ನದಾನ ಮಹಿಮಾ ಪ್ರಕರಣ ಸುಳಾದಿರಾಗ: ಅಭೋಗಿ ಧ್ರುವತಾಳ ಅನ್ನದಾನ ಪ್ರಧಾನ ನಿಧಾನಿಸಿ ನೋಡಲುಅನ್ನಂತ ಕಲ್ಪದಲ್ಲಿ ವಿಚಾರಿಸೇಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜಪೂರ್ಣನಾಗನು ಕಾಣೊ ಗುಣಿಸಿ ಕೇಳೊಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯಭಿನ್ನ ಭಿನ್ನ ಜೀವರಲ್ಲಿ ತ್ರಯ ವಿಕಾರ ಉಂಟು ಇವೆಇನ್ನು ಲಾಲಿಸುವದು ಸ್ಥೂಲ ಸೂಕ್ಷ್ಮತನ್ನ ಮೊದಲು ಮಾಡಿ ಅಧ್ಯಾತ್ಮವೆನಿಸುವದುಅನ್ಯ ಜನರೆಲ್ಲ ಅಧಿಭೌತಿಕಾಧನ್ಯ ದೇವತೆಗಳೆ ಅಧಿದೈವರೆನಿಸುವರುಉಣಿಸಬೇಕು ಈ ಪರಿ ತಿಳಿದೂಘನ್ನ ತಾಪತ್ರಯಗಳು ಹಿಂದಾಗಿ ಪೋಪವು ಪಾ –ವನ್ನನಾಗುವ ಜ್ಞಾನಭಕುತಿಯಿಂದತನ್ನ ಮನಸು ಅಧ್ಯಾತ್ಮ ಇಂದ್ರಿಯಂಗಳೆ ಅಧಿದೈವಚೆನ್ನ ಶರೀರವೆ…
-
Saptanna upasana prakarana suladi – Vijayadasaru
ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿರಾಗ: ಹಂಸಾನಂದಿ ಧ್ರುವತಾಳಅಪ್ರತಿಹತ ದ್ರವ್ಯಗತವಾಗುವದಕ್ಕೆ ಬಾ –ಲ ಪ್ರಾಯ ವೃದ್ದನಾಗಿ ಬಲು ಜನ್ಮವವಿಪ್ರವಾಸನಾಗಿ ಯಾತ್ರಿತೀರ್ಥವಾ ಚರಿಸಿಕ್ಷಿಪ್ರಗತಿಯಿಂದ ನಾನಾ ಯಾಗ ಯೋಗವಿಪ್ರರೊಡನೆ ರಚಿಸಿ ಅನೇಕ ದಾನಂಗಳದ್ಯು ಪೃಥಿವಿ ಪೊಗಳುವಂತೆ ಮಾಡಿದರೂಅಪ್ರಧಾನವಲ್ಲದೆ ಕರ್ಮದ ಸ್ವಾತಂತ್ರಅಪ್ರಬುದ್ದರಿಗೆ ಇದು ಮೆಚ್ಚ ಕಾಣೊಅಪ್ರೀಯವಾಗುವದು ತಾತ್ವಿಕರಿಂದ ಹರಿಗೆಅಪ್ರೀಯನಾಗುವ ಅಲ್ಪಪುಣ್ಯಅಪ್ರಮೋದದಿಂದ ಉಂಡು ತೀರಿಸಿ ನಾ –ನಾ ಪ್ರಕಾರ ದೇಹವ ಧರಿಸುವರುಈ ಪ್ರಕರಣ ಬಿಟ್ಟು ಜ್ಞಾನವ ಸಂಪಾದಿಸಿಅಪ್ರಮೇಯ ಹರಿಯ ರೂಪಂಗಳಸಪ್ರಮಾಣದಲ್ಲಿ ತಿಳಿದು ಕೊಂಡಾಡಿ ನಿತ್ಯಸ್ವಪ್ರಕಾಶ ಗುಣದಿಂದ ಧ್ಯಾನಗೈದುಅಪ್ರಯಾಸ ಚಿತ್ತದಲಿ ಅನಂತ ಕಲ್ಪಕ್ಕೆ ನೀಸುಪ್ರೀತಿ ಬಡಿಸು…
-
Sarvasarabhoktha suladi – Vijayadasaru
ಸರ್ವಸಾರಭೋಕ್ತ ಸುಳಾದಿರಾಗ: ಪಂತುವರಾಳಿ ಧ್ರುವತಾಳ ಪುಣ್ಯವೆ ಪೋಯಿತೆಂಬ ನುಡಿಸಲ್ಲಾ ಎಲೊ ನಲ್ಲಾಪುಣ್ಯವೆಂಬೊದು ಎಂತೊ ತಿಳಿಯದಯ್ಯಾಪುಣ್ಯ ಪೋಗುವದೆಂತೊ ಆವಾಗಕಣ್ಣಿಗೆ ಕಾಣಿಸದು ಶಬ್ದಮಾತ್ರಇನ್ನಿತು ಪುಣ್ಯವೆಲ್ಲ ಜ್ಞಾನಕಾರ್ಯವು ಮತ್ತೆಘನ್ನ ಪಾಪಗಳು ಅಜ್ಞಾನ ಕಾರ್ಯಅನ್ನಂತ ಕಾಲಕ್ಕೆ ದ್ವಿವಿಧ ರೂಪಕೆ ನೋಡೆಉನ್ನತವಾಗಿ ನೀನೆ ಸರ್ವದಲ್ಲಿಬನ್ನ ಬಡಿಸುವ ಅಜ್ಞಾನ ಜ್ಞಾನಕ್ಕೆ ಸಂ –ಪನ್ನ ನಿರ್ದೋಷ ಮೂರ್ತಿ ನೀನೆ ವಿಷಯಾಇನ್ನಿತಾಗಿರಲಿಕ್ಕೆ ಮಾಡಿದಾ ಪುಣ್ಯಮುನ್ನೆ ಪೋಯಿತೆಂಬ ವಿನೋದವೆಇನ್ನು ನಾನೇನೆಂಬೆ ಈ ಮಾತಿಗೆ ಪ್ರ –ಸನ್ನ ವದನಾಂಭೋಜ ವಿಮಲ ನಯನಾಅನ್ಯ ಜನರಿಂದ ಪಾಪ ಪುಣ್ಯವೆ ತಂದುಉಣ್ಣಿಪದಾಗುವದೆ ವಿಚಾರಿಸೇಜನ್ಮಾದಿಗಳು ನಿನ್ನ ಅಧೀನವಾಗಿರಲೂಇನ್ನೇನೊ…
