By Vadirajaru

  • Ahudo hanumanta

    Composer : Shri Vadirajaru ಅಹುದೋ ಹನುಮಂತ ನೀನಹುದೊ ಬಲವಂತನೀನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ||ಪ|| ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀನಹುದೊ ||ಅ.ಪ|| ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ ತಂದ್ಯೊ ಸಕಲ ಕಪಿಗಳಿಗೆಮಂಜುಭಾಷಣ ನೀನು ಶರಧಿಯನು ದಾಟಿದೆಯೊಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ||೧|| ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನುಪಂಥವನಾಡಿ ದಾಯಾದಿಯರೊಡನೆಕಂತುಪಿತನ ಕೂಡಿ ಕೌರವರ ಗೆಲಿದ್ಯೊಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ||೨|| ಮಧ್ವಾವತಾರದಲಿ ಮುನಿವೇಷವನು ತಾಳಿಅದ್ವೈತವೆಂಬೊ ಅರಣ್ಯವನು ತರಿದೆಮಧ್ವ ಶಾಸ್ತ್ರವೆಂಬೊ ಮತವ ನಿರ್ಣೈಸಿದೆಮುದ್ದು ಹಯವದನದಾಸ ನೀನಹುದೊ…

  • Kailasadase ellihudo

    Composer : Shri Vadirajaru ಕೈಲಾಸದಾಶೆ-ಯೆಲ್ಲಿಹುದೊಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ [ಪ] ಗುರು ಹಿರಿಯರರಿಯದಗೆ ಪರಗತಿಯ ತೊರೆದವಗೆ,ವರಧರ್ಮ ಪಥವ ಮರೆದವಗೆ,ದುರುಳರನೆ ಪೊರೆದು ಪರಸತಿಯ ನೆರೆದವಗೆ [೧] ದೀನ ಜನರೊಡನಾಡಿ ಹೀನ ಕರ್ಮವ ಮಾಡಿ,ಆನೆಂಬ ಮಮತೆಯನೆ ಕೂಡಿ,ದಾನವನೆ ಬೇಡಿ ದುರ್ದಾನಕೆ ಮರುಳಹಗೆ [೨] ಅನಾಚಾರಂಗಳ ಬಿಡದೆ, ಮನೆಗೆ ಬಂದರು ಕೊಡದೆ,ಧನದ ಗಂಟುಗಳನು ಕಡಿಯದೆ,ಅನುಸರಿಸಿ ನಡೆಯದೆ, ಪರರ ಜರಿದು ನುಡಿವವಗೆ [೩] ವಾದಿರಾಜನ ನುಡಿಯ ಹಿತವೆಂದು ಲಾಲಿಸದೆ,ಕ್ರೋಧ ಮಯನಾಗಿ ದೂಷಿಪಗೆ,ಪಾದಕೆರಗದೆ ಜನನಿಯ-ನಾದರಿಸದವಗೆ [೪] ಹಯವದನ-ನಲ್ಲೆಂದು ತಾನೆಲ್ಲ ಬಲ್ಲೆಯೆಂದು,ದಯವುಳ್ಳವರ ದೈವನೆನದೆ ಈ…

  • Kollu bega kallara

    Composer : Shri Vadirajaru ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ||ಪ||ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ||ಅ.ಪ|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಎಲ್ಲಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತ್ತಿದ್ದರು, ಗಡಬಲ್ಲೆನವರ ಕೊಲೆಗಾರರ ಹಲ್ಲ ಕೀಳದೆ ನಿಲ್ಲರು ||೧|| ಲಕ್ಷುಮೀ ನಾರಾಯಣಾ ಜಯ ಲಕ್ಷುಮೀ ನಾರಾಯಣಾಲಕ್ಷುಮೀ ನಾರಾಯಣಾ ಮಹಾಲಕ್ಷುಮೀ ನಾರಾಯಣಾ ಒಳ್ಳೆ ಮಾತನಾಡಲವರು ಕೋಲಾಹಲವ ಮಾಡಿ ಬೈವರುಗೆಲ್ವ ಶಕ್ತಿ ಇಲ್ಲ ನಮಗೆ, ಬಲ್ಲೆ ನೀ ಮಧ್ವಗೊಲಿದವನೆ ||೨|| ಲಕ್ಷುಮೀ ನಾರಾಯಣಾ…

error: Content is protected !!