Kanakadasaru

  • Enu Karana Baya

    Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ, ಪ್ರಹ್ಲಾದವರದನರಸಿಂಹ ನರಸಿಂಹ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮಲೆತು ಮಾವನ ಕೊಂದು ನಿಂತೆ,ಇಂಥಾ ಭೂಮಿಗಿಳಿದನಾರಸಿಂಹ ನರಸಿಂಹ || ೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ…

  • Bandevayya Govinda shetty

    Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ |೧| ಒಡೆದ ಮಡಕೆ ತಂದು ಅರೆದು ನಾಮವ ಮಾಡಿಕೊಡುವೆನು ಕಾಸಿಗೆ ಒಂದೊಂದನುಒಡಲ ತುಂಬಿ ಮಿಕ್ಕ ವೋಗರ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ |೨| ಶೇಷಗಿರಿಯಮೇಲೆ ವಾಸವಾಗಿಹ ಶೆಟ್ಟಿದೇಶ ದೇಶಕ್ಕೆ ಹೆಸರಾದ ಶೆಟ್ಟಿಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ ಶೆಟ್ಟಿಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ…

  • Enna Kanda halliya hanuma

    Composer : Shri Kanakadasaru ಎನ್ನ ಕಂದ ಹಳ್ಳಿಯ ಹನುಮ ||ಪ||ಚೆನ್ನಾಗೈದಾರೆ ಲಕ್ಷ್ಮಣ ದೇವರು ||ಅ.ಪ|| ತುಪ್ಪ ಪಂಚಾಮೃತವಂದು ಅಡವಿ ಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲ್ಲೈದಾರೆ ||೧|| ನವ ವಸ್ತ್ರವಂದು ನಾರ ಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾದಿ ಕಸ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲ್ಲೈದಾರೆ ||೨|| ಕನಕ ರಥಗಳಂದು ಕಾಲು ನಡಿಗೆಯಿಂದುಘನ ಛತ್ರ ಚಾಮರಂದು ಬಿಸಿಲು ಇಂದುಸನಕಾದಿ ಓಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲ್ಲೈದಾರೆ ||೩|| enna kaMda haLLiya…

error: Content is protected !!