Author: Daasa

  • Enu Pelali teerthapatiya

    Composer : Shri Vijayadasaru ಏನು ಪೇಳಲಿ ತೀರ್ಥಪತಿಯ ಮಹಿಮೆಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ [ಪ] ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದುದೇಶದೊಳು ಪುಸಿಯಲ್ಲ ಸಿದ್ಧವೆನ್ನಿಈಶನುಪದೇಶದಿಂದಲಿ ವಿಗತ ಜನನಾಗಿಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ [೧] ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿಇರಲು ಕಾಲಾಖ್ಯ ಉರಗನು ಕಚ್ಚಲುಪರಮಭೀತಿಯಿಂದ ಅವಳ ವಸನವ ತಂದುವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು [೨] ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲುನಿಲ್ಲದೆ ಸನ್ಮುಕ್ತಿ ಧರನಾಗುವಾಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ [೩] Enu pELali tIrthapatiya…

  • Namo namo Krishnaveni

    Composer : Shri Prasannavenkata dasaru ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ [ಪ.] ಈ ಜನ್ಮದಘವು ನಾನಾ ಜನ್ಮ ಕೃತ ದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ (೧) ವಿಪ್ರಮುನಿ ಸುರನರರು ಕನ್ಯಕ್ಕೆ ಗುರು ಬರಲುಕ್ಷಿಪ್ರ ನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆಪ್ರಸನ್ನೀ ಕರಿಸಿಕೊಳ್ಳುವರಮ್ಮ (೨) ನಿರ್ಮಳಾತ್ಮಕ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ (೩) namO namO kRuShNavENinamO namO kRuShNavENi kalyANi…

  • Shobhanavennire swarga

    Composer : Shri Vijayadasaru ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |ಶೋಭಾನವೆನ್ನಿ ಶುಭವೆನ್ನಿ [ಪ] ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |ಭರದಿಂದ ಇಳಿದು ಸತ್ಯಲೋಕ |ಭರದಿಂದ ಇಳಿದು ಸತ್ಯಲೋಕಕೆ ಬಂದ |ವಿರಜೆಗಾರುತಿ ಬೆಳಗಿರೇ (೧)ಸರಸಿಜಾಸನನಂದು ಹರಿಪಾದ ತೊಳೆಯಲು |ಸರಸ ಸದ್ಗುಣ ಸುರಲೋಕ |ಸರಸ ಸದ್ಗುಣದಿ ಸುರಲೋಕಕೈದಿದಾ |ಸ್ವರ್ಣೆಗಾರುತಿಯ ಬೆಳಗಿರೇ (೨)ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು |ಚಂದದಿಂದಲಿ ಮೇರುಗಿರಿಗೆ |ಚಂದದಿಂದಲಿ ಮೇರುಗಿರಿಗೆ ಬಂದಾ |ಸಿಂಧುವಿಗಾರುತಿಯ ಬೆಳಗಿರೇ (೩)ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು |ಚತುರ್ಭಾಗವಾಗಿ ಕರೆಸಿದ |ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ…

error: Content is protected !!