Author: Daasa

  • Ava rogavu enage

    Composer : Shri Gopala dasaru Expl by Shri Kesava Rao Tadipatri ಆವ ರೋಗವು ಎನಗೆ ದೇವ ಧನ್ವಂತ್ರಿಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯಸಾವಧಾನದಿ ಕೈಯ್ಯ ಪಿಡಿದು ನೋಡು ಹರಿ ಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವುಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿಪ್ರಸಾದ ಜಿಹ್ವೆಗೆ ಸವಿಯಾಗದಯ್ಯ ||೧|| ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರ ಅಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾ ಘ್ರಾಣಿಸದು ನಾಸಿಕವುಹರಿ ಯಾತ್ರೆಗಳಿಗೆನ್ನ ಕಾಲೇಳವಯ್ಯ ||೨||…

  • Enna binnapa keLo

    Composer : Shri Gopaladasaru ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊಸಣ್ಣವನು ಇವ ಕೇವಲ |ಬನ್ನಬಡಿಸುವ ರೋಗವನ್ನು ಮೋಚನ ಮಾಡಿಚೆನ್ನಾಗಿ ಪಾಲಿಸುವದೊ ಕರುಣಿ ||ಪ|| ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊಈ ಮೂರು ವಿಧ ವಸ್ತುಗಳು,ನಾರಾಯಣನ ಭಜಕರಾದವರ,ಸಾಧನಕೆ ಪೂರ್ಣವಾಗಿಪ್ಪುವೊ,ಘೋರ ವ್ಯಭಿಚಾರ ಪರನಿಂದೆ ,ಪರವಿತ್ತಾಪಹಾರ ಮಾಡಿದ ದೋಷದಿ ,ದರಿದ್ರರಾಗುವರು ಮೂರು ವಿಧದಿಂದಲೆ,ಕಾರಣನು ನೀನೆ ,ದುಷ್ಕರ್ಮ ಪರಿಹರಿಸೊ, ಸ್ವಾಮಿ ||೧|| ವಸುಮತಿಯ ಮೇಲಿನ್ನು ಅಸುರಜನರೆ ಬಹಳ,ವಶವಲ್ಲ ಕಲಿಯ ಬಾಧೆ,ಬಿಸಿಲಿಂದ ಪೀಡಿತವಾದ ಸಸಿಗಳಂತೆ,ಶಿಶುಗಳು ನಾವಿಪ್ಪೆವೊ,ಅಸುರಾರಿ ನಿನ್ನ ಕರುಣಾಮೃತದ,ಮಳೆಗರೆದು ಕುಶಲದಲಿ ಪಾಲಿಸುವುದೊ,ಕೆಸರಿಂದ ಕೆಸರು ತೊಳೆದಂತೆ,ಕರ್ಮದ ಪಥವು,ಅಸುನಾಥ…

  • Shri Dhanvantari Suladi – Vijayadasaru

    Expln by Shri Kesava Rao Tadipatri Part 1 Part 2 ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ ಕಳೆವುದು ವೇಗದಿಂದನಾಯಿ ಮೊದಲಾದ ಕುತ್ಸಿತ ದೇಹ ನಿಕಾಯವಾ ತೆತ್ತು ದುಷ್ಕರ್ಮದಿಂದಕ್ರೀಯಮಾಣ ಸಂಚಿತ ಭರಿತವಾಗಿದ್ದ ದು:ಖಹೇಯ ಸಾಗರದೊಳು ಬಿದ್ದು ಬಳಲೀನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನಬಾಯಲ್ಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿರಾಯಾ ರಾಜೌಷಧಿ ನಿಯಾಮಕ ಕರ್ತಶ್ರೀಯರಸನೆಂದು ತುತಿಸಲಾಗಿತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆನೋಯಗೊಡದೆ ನಮ್ಮನ್ನು ಪಾಲಿಪಾಧ್ಯೇಯಾ ದೇವಾದಿಗಳಿಗೆ…

error: Content is protected !!