Rayaru

  • Rayara bhagyavidu

    Composer : Shri Honnali Venkatadasaru ರಾಯರ ಭಾಗ್ಯವಿದು ರಾಘವೇಂದ್ರ ||ಕಾಯಜ ಪಿತನಂಘ್ರಿ ಸೇವೆ ಮಾಡುವುದೆಲ್ಲ [ಪ] ಹರಿ ಹರಿ ಹರಿ ಎಂದು ಮೊರೆ ಇಡಲಾಕ್ಷಣ,ನರಹರಿ ಕಂಬದಿ ತ್ವರಿತದಿ ಬಂದುದು [೧] ಬಾಲ ಯತಿಯು ಮೈ ಮರೆತು ಪಾಡುತಲಿರೆ ,ಗಾನಲೋಲನು ಕುಣಿ ಕುಣಿದಾಡುವುದೆಲ್ಲ [೨] ಮಂತ್ರಸದನದಿ ಸಂತರ ಸೇವಿಪರಿಗೆ,ಕಂತುಪಿತನ ಕಾರುಣ್ಯ ದೊರೆಯುವುದೆಲ್ಲ [೩] ಸ್ನಾನ ಧ್ಯಾನ ಜಪ ವ್ರತ ಸಾಧನಮಾಲೋಲನ ದಯದಿಂದ ನಡೆಯುವುದೆಲ್ಲ [೪] ಕ್ಷಣ ಬಿಡದಲೆ ವೆಂಕಟವಿಠ್ಠಲನ ಪಾದಕುಣಿದು ಪಾಡಿಸೆ, ಗತಿಯ ಪಡೆವುದೆಲ್ಲ [೫] rAyara…

  • Raghavendra Tirtha

    Composer : Shri Indiresha ankita ರಾಘವೇಂದ್ರ ತೀರ್ಥ |ಬೋಧಿಸು ಭಾಗವತದ ಅರ್ಥ |ರಾಘವ ನಿಜಪದ ಆರಾಧಿಪ ಧೀರ,ಸರಾಗದಿ ಪಾಲಿಸು ನೀ ಪುರುಷಾರ್ಥ [ಪ] ತುಂಗಾ ತೀರ ನಿವಾಸ, ತುಂಗಾ ತಟವಾಸರಾಘವ ಸಿಂಗನ ನಿಜದಾಸ,ಪಂಗು ಬಧಿರ ಮುಖ್ಯಾಂಗ ಹೀನರಕೃಪಾಂಗ ನೋಟದಿ ಶುಭಾಂಗರ ಮಾಡುವಿ [೧] ಪಾದೋದಕ ಸೇವಾ ಕೃತರಿಗೆ,ಅಗಾಧ ಫಲಗಳೀವ,ಮಾಧವನಾಜ್ಞೆಯಲಿ ಮಾಯಿಗಳೋಡಿಸಿಸಾಧು ಜನಕೆ ಆಹ್ಲಾದ ಬಡಿಸುವಂತೆ [೨] ಭುಜಗಧರಾಧಿಪನಾ ವಲಿಸಿಕೊಂಡಸುಜನ ಶಿರೋಮಣಿಯೇ,ನಿನ್ನ ನಿಜ ಪದ ಯುಗಳನು ಭಜಿಸುವ ಜನಕೆವಿಜಯಪ್ರದ ಇಂದಿರೆಶನ ದೂತ [೩] rAGavEMdra tIrtha |bOdhisu…

  • Mantralaya nivasa

    Composer : Shri Vijaya dasaru ಮಂತ್ರಾಲಯನಿವಾಸ ಉತ್ತಮ ಹಂಸ |ಸಂತಾಪ ಪರಿಹರಿಸಿ ಕೊಡು ಎನಗೆ ಲೇಸಾ || ಪ|| ಯತಿಗಳ ಶಿರೋರನ್ನ ಯೋಗಸಂಪನ್ನ |ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||ನುತಿಸುವೆ ಭಕ್ತಿಯಲಿ ಬಿಡದೆ |ಮುಕುತಿಯಲಿ ಸತತಾನಂದವನೀವ (೧) ಕಪಿಲ ತೀರ್ಥದಲ್ಲಿ ಕರಣ ಶುದ್ಧಿಯಲ್ಲಿ |ತಪವ ಮಾಡುವ ಮೌನಿ ಸೌಮ್ಯ ಜ್ಞಾನಿ ||ಜಪಶೀಲ ಗುಣ ಗಣಾಂಬುಧಿ, ಪುಣ್ಯದ ಬುದ್ಧಿಕೃಪೆಮಾಡಿ ಕೊಡು ಗುರುವೆ, ಶಿಷ್ಯ ಸುರ ತರುವೆ (೨) ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |ಶಮೆ ದಮೆಯಲ್ಲಿ ಉಳ್ಳ ಮಹಿಮೆಯಾ…

error: Content is protected !!