-
Yogi kulavara mukuta
Composer : Shri Gopati Vittala dasaru ಯೋಗಿ ಕುಲ ವರ ಮಕುಟಶ್ರೀರಾಘವೇಂದ್ರರ ಭಜಿಸಿರೋ [ಪ] ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನುದುರ್ವಾದಿ ಗಜ ಸಮುದಾಯಕೇ (೧) ದೂಷಿಸುವ ಜನರುಗಳ ಗರ್ವಅಶೇಷ ಪರಿಹಾರಗೈಸುವಾದಾಸರಭಿಮಾನವನು ಬಿಡದಿಹದೋಶ ವರ್ಜಿತನೆನಿಸುವಾ (೨) ದಿನಪನಂದದಿ ಕಾಂತಿಬೃಂದಾವನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ (೩) ವ್ಯಾಪ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾಆಪ್ತರಿಲ್ಲದೆ ಈತನೇ ಯೆನಗ್ಆಪ್ತನನುದಿನ ವಾಗುವಾ (೪) ಕೋಲ ತನಯೆಯ ತೀರದಲಿಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠ್ಠಲನಕೃಪೆಗಾಲಯನು ಯೆಂದೆನಿಸುವಾ (೫) yOgi kula vara makuTaSrIrAGavEMdrara BajisirO [pa]…
-
Sharanu Shri guru
Composer : Shri Gurujagannatha dasaru ಶರಣು ಶ್ರೀ ಗುರು ರಾಘವೇಂದ್ರಗೆಶರಣು ಯತಿಕುಲತಿಲಕಗೆ [ಪ] ಶರಣು ಶರಣರ ಪೊರೆವ ಕರುಣಿಗೆಶರಣು ಹರಿಗುಣಲೋಲಗೆ [ಅ.ಪ] ಮಧ್ವಮತ ಶುಭವಾರ್ಧಿ ಚಂದ್ರಗೆಸಿದ್ಧಸಾಧನ ಮೂರ್ತಿಗೆಬದ್ಧ ಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ ರಾಮದೂತಗೆ || ೧ || ನಿತ್ಯ ನಿರ್ಮಲ ಪುಣ್ಯಗಾತ್ರಗೆಭೃತ್ಯಪಾಲಕ ಸುಗುಣಪಾತ್ರಗೆಸತ್ಯ ಜ್ಞಾನ ಸುಮೋದ ನೇತ್ರಗೆಸ್ತುತ್ಯ ಯತಿವರ ಸುಜನಮಿತ್ರಗೆ || ೨ || ಮೋದದಾಯಕ ಭೇದಸಾದಕಮೇದಿನಿ ಸುರಜಾಲ ನಾಯಕಮೋದತೀರ್ಥರ ಚರಣ ಸೇವಕಾದಿಗುರುಜಗನ್ನಾಥ ವಿಠಲ ದೂತಗೆ || ೩ || SaraNu SrI guru…
-
Endu karunadinda noduvi
Composer : Shri Ananthadreesharu ಎಂದು ಕರುಣದಿಂದ ನೋಡುವಿ ರಾಘ-ವೇಂದ್ರ ಎಂದು ನಮಗಾನಂದ ನೀಡುವಿ [ಪ] ಎಂದು ಕರುಣದಿಂದ ನೋಡುವಿನೊಂದು ತಾಪದಿಂದ ಬಹಳಬೆಂದು ನಿನ್ನ ಕಂದನೆಂತೆಂದು ಪಾದಕೆಹೊಂದಿದವನ [ಅ.ಪ] ದೀನನಾನು ಧೇನಿಸುವೆನೊ ಅನುದಿನ ಕಾಮಧೇನು ದಾನಶೂರನೊದಾನದ ಕುಲದ ನೀಧಾನಿ ಎಂದೆನಿಸಿಕೊಂಬಿದಾನದಲ್ಲಿ ಅಗ್ರಗಣ್ಯ ಉನ್ನತ ದಾನವ ನೀಡಿ (೧) ಅಲ್ಪ ನಾನು ಜಲ್ಪಕೆಣಿಸುವೆ ಅ-ನಲ್ಪ ನೀನು ಕಲ್ಪವೃಕ್ಷ ಕಲ್ಪನಲ್ಲವೆಅಲ್ಪರಿಗೆ ಅನಲ್ಪ ಫಲ ಅಕಲ್ಪತಾಗಿ ಕಲ್ಪಿಸುವರೆಅಲ್ಪನವರನಲ್ಪನೆಂದು ಸ್ವಲ್ಪಮನೋಕಲ್ಪವಿಲ್ಲದೆ (೨) ಗುಣಿಯು ನೀಣು ಅಣಿಯು ಇಲ್ಲದ ದುರ್ಗುಣಿಯು ನಾನು ಹಣಿಯೋ ನೀನು…