Hari

  • Sukhada sundara vittala

    Composer: Shri Gurupranesha dasaru ಸುಖದ ಸುಂದರ ವಿಠ್ಠಲರಾಯಾ |ಭಕುತರ ಪಾಲಿಸೊ ಜೀಯಾ || ಪ. || ಸುಖತೀರ್ಥರ ಶಾಸ್ತ್ರಕೆ ಸಮ್ಮತವಾಗಿ |ಪ್ರಕಟಿಸಿದೆನನ್ನಿಂದ ಕೀರ್ತನೆಯ ||ಸಕಲ ಜನರು ಕೇಳಿ ಪಠಿಸುತಲಿರದು |ಮುಕುತಿಗೆ ಸತ್ಪಥವಾಗಿರಲಿ || ೧ || ಆಯುರಾರೋಗ್ಯವು ಹೆಚ್ಚುತಲಿರಲಿ |ಮಾಯಾಮೋಹಗಳು ದೂರಾಗಲಿ ||ಶ್ರೇಯಸ್ಸೆಂಬುದು ಕರಗತವಾಗಲಿ |ವಾಯುದೇವರು ಸುಪ್ರೀತರಾಗಲಿ || ೨ || ಕರುಣಾಕರ ನೀನೆಂಬುದು |ಮರೆಯದ್~ ಹಾಂಗೆ ಮಾಡೊ ಕರಿವರದಾ ||ಗುರು ಪ್ರಾಣೇಶ ವಿಠ್ಠಲ ಕರವ ಪಿಡಿದು |ಶರಣರ ಪೊರೆಯ ಬೇಕೊ ವಿಠ್ಠಲ || ೩…

  • Nandenado Swami

    Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ ||೧|| ಕಾಯಕಷ್ಟವು ನಿಂದೇ, ದೇಹದ ಬಲ ನಿಂದೇನ್ಯಾಯ ಅನ್ಯಾಯವೂ ನಿಂದೇ,ಬಾಯಿಮಾತು ನಿಂದೇ, ಬರುವ ಭಾಗ್ಯವು ನಿಂದೇಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨|| ಯಾತ್ರೆ ತೀರ್ಥವು ನಿಂದೇ, ಕ್ಷೇತ್ರದ ಫಲ ನಿಂದೇಸತ್ಪಾತ್ರ ದಾನ ನೇಮ ನಿಂದೇ,ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠಲಸ್ತೋತ್ರ ಮಾಳ್ಪುದು…

  • Maleya dayamado

    Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರುಮಗಿ ಮಗಿದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು ಯೋಚನೆಯ ಮಾಡುತಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨|| ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣಬಂದಿದೆ ಭಾದ್ರಪದ ಮಾಸವೀಗಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ…

error: Content is protected !!