-
Enu Karana Baya
Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ, ಪ್ರಹ್ಲಾದವರದನರಸಿಂಹ ನರಸಿಂಹ ||೧|| ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮಲೆತು ಮಾವನ ಕೊಂದು ನಿಂತೆ,ಇಂಥಾ ಭೂಮಿಗಿಳಿದನಾರಸಿಂಹ ನರಸಿಂಹ || ೨|| ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ…
