-
Jaya muneendrana
Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು ಕಡಿದು,ಶುದ್ಧ ಯುಕುತಿ ಸುಧೆಯ ತೆಗೆದನ,ಶಿಷ್ಯ ಜನಕೆ ಶ್ರದ್ಧೆಯಿಂದ ಲದನು ಎರೆದನ,ಮೋದದಿಂದ ಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ [೧] ಮಾನನೀಯ ಶೀಲರಾದ ಮಾನವರಕರೆದು ಹರಿಯ ಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಕೊಡುವ,ಜ್ಞಾನಮತವ ಜನಕೆ ಸಾರ್ದನ,ಶಿಷ್ಯಜನಕೆ ಸಾನುರಾಗದಿ ತತ್ವ ಪೇಳ್ದನದೋಶ ದೂರ ದಾನವರಿಯ ಕಥೆಯ ಪೇಳ್ದನ…
