-
Harismarana suladi – Purandara dasaru
ಶ್ರೀಪುರಂದರದಾಸಾರ್ಯ ವಿರಚಿತಹರಿಸ್ಮರಣ ಸುಳಾದಿರಾಗ: ಕಾನಡ ಧ್ರುವತಾಳ ಎನ್ನ ಹೃದಯದಲ್ಲಿ ಎಲ್ಲೆಲ್ಲಿ ಅನುಪಮ ಮಹಿಮನೆನಿನಗೀಯಲೊ ಹರಿಯೆಎನ್ನ ಭಾವದಲ್ಲಿ ಬರಿದೆ ಸುಕೃತ ದುಷ್ಕೃತದಿಬನ್ನ ಬಡಿಸಿ ನೀ ನೋಡುತಿಹರೆಎನ್ನ ಅವಗುಣಗಳೆಣಿಸುವರೇ ಕಡೆ ಉಂಟೆನಿನ್ನ ಘನ್ನತೆ ನೋಡಿ ಪಾಲಿಸೆಲೊ ಹರಿಯೆಎನ್ನ ಹೃದಯದಲ್ಲಿ ನಿನ್ನಾಧೀನದ ಮನೋಜನನಎನಗನ್ಯಥಾ ಗತಿಯಿಲ್ಲ ಅನಾಥ ನಾನೈಯ್ಯಅನಾಥಬಂಧು ಪುರಂದರವಿಟ್ಠಲರೇಯಾನಿನ್ನ ಡಿಂಗರಿಗನೆನಸಲೊ ಕೃಪಾಂಬುಧಿಯೇ || ೧ || ಮಟ್ಟತಾಳ ಮನವೇ ಕೇಳು ಮಾಮನೋಹರನಮನಸಿಜಪಿತನ ನಿತ್ಯನಾ ಅನುದಿನದಲಿಅಗಲದಿಪ್ಪ ಘನಮಹಿಮ ದೇವ ಪರಿಯನನೆನೆವದೇನು ನೇಹ ಮಾಡಿದವನಮನವನೀಯ ತನ್ನನೀವನಾ –ದನುಜ ಮನುಜ ದಿವಿಜರೊಡೆಯಗೆತನವು ಪ್ರಾಣ ವೊಪ್ಪಿಸುವನಿಗೆಅನುದಿನದಲಿ ಪೊರೆವನು…
