-
Hari Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)ಶ್ರೀಹರಿ ಪ್ರಾರ್ಥನಾ ಸುಳಾದಿರಾಗ : ಬಾಗೇಶ್ರೀ ಧ್ರುವತಾಳಒಲ್ಲೆ ವಿಷಯಗಳೆಂದವರಿಗೆ ಒಂ –ದಲ್ಲದೆ ದ್ವಿಗುಣಿತ ವಿಷಯವೆಂಬಫಲ್ಲಿಸುತಿಪ್ಪ ಅದರಲ್ಲಿ ನೀನೆವೆಬಲ್ಲಿದನೆಂಬನುಭವಸಿದ್ಧಒಳ್ಳಿತು ನಾವೊಂದು ಮಾಡುವೆ ಬಿನ್ನಪಸಲ್ಲಿಸಬೇಕಲ್ಲದಿದ್ದರುಪೇಕ್ಷಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದುಸಿಲ್ಲುಕದ ಜನರು ಇಪ್ಪರಂತೇವಲ್ಲಭ ನೀನಿದು ತೋರಿಸೊ ಎನ್ನಲ್ಲಿಇಲ್ಲದಿದ್ದರೆ ಮಹಾ ಶಕುತಿ ಏನೋಮಿಳ್ಳಿತಯೇ ನೀನಾಗಿ ವಾಸುದೇವವಿಟ್ಠಲಒಲ್ಲಿಯೊ ವಿಷಯದ ಸಾರಭೋಕ್ತಾ || ೧ || ಮಟ್ಟತಾಳ ಬಡತನ ಹಿಂಗದಿರೆ ಧೊರೆಗಳು ತಾವಾಗಿಪಿಡಿದು ಅವಗೆ ಮೇಟಿ ಪೊಲಗಳು ಕಟ್ಟೀಗತಡಿಯದೆ ಬೇಕಾದ ಸಕಲ ಸಾಧನ ನೀಡಿನಡಸುತ ಬರುವಂಥ ಧೊರಿಗಳ ಅಭಿಮಾನಪೊಡವಿಗೆ ಪತಿ ವಾಸುದೇವವಿಟ್ಠಲ ನೀನೆಒಡೆಯ…
