-
Annadaana mahima prakarana suladi – Vijayadasaru
ಅನ್ನದಾನ ಮಹಿಮಾ ಪ್ರಕರಣ ಸುಳಾದಿರಾಗ: ಅಭೋಗಿ ಧ್ರುವತಾಳ ಅನ್ನದಾನ ಪ್ರಧಾನ ನಿಧಾನಿಸಿ ನೋಡಲುಅನ್ನಂತ ಕಲ್ಪದಲ್ಲಿ ವಿಚಾರಿಸೇಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜಪೂರ್ಣನಾಗನು ಕಾಣೊ ಗುಣಿಸಿ ಕೇಳೊಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯಭಿನ್ನ ಭಿನ್ನ ಜೀವರಲ್ಲಿ ತ್ರಯ ವಿಕಾರ ಉಂಟು ಇವೆಇನ್ನು ಲಾಲಿಸುವದು ಸ್ಥೂಲ ಸೂಕ್ಷ್ಮತನ್ನ ಮೊದಲು ಮಾಡಿ ಅಧ್ಯಾತ್ಮವೆನಿಸುವದುಅನ್ಯ ಜನರೆಲ್ಲ ಅಧಿಭೌತಿಕಾಧನ್ಯ ದೇವತೆಗಳೆ ಅಧಿದೈವರೆನಿಸುವರುಉಣಿಸಬೇಕು ಈ ಪರಿ ತಿಳಿದೂಘನ್ನ ತಾಪತ್ರಯಗಳು ಹಿಂದಾಗಿ ಪೋಪವು ಪಾ –ವನ್ನನಾಗುವ ಜ್ಞಾನಭಕುತಿಯಿಂದತನ್ನ ಮನಸು ಅಧ್ಯಾತ್ಮ ಇಂದ್ರಿಯಂಗಳೆ ಅಧಿದೈವಚೆನ್ನ ಶರೀರವೆ…
