-
Kadegannali nee
Composer : Shri Helavanakatte Giriyamma ಕಡೆಗಣ್ಣಲಿ ನೀ ನೋಡದಿರೆನ್ನಯ್ಯ |ಬಿಡ ಬೇಡವೊ ಕೈಯ್ಯ | ಬಡವರ ಬಂಧು ಬಹು ಕೃಪಾಸಿಂಧು |ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ || ಪ || ಶತ ಅಪರಾಧವ ಮಾಡಿದೆನಯ್ಯ |ಸೇರಿದೆ ನಾ ನಿನ್ನ ಬೆನ್ನಾಅತಿ ಪಾತಕಿ ಅಜಾಮಿಳನ ಉದ್ಧರಿಸಿದೆ |ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ || ೧ || ನೆಲೆಗಾಣದೆ ನಾನಾ ಪರಿ ಚಿಂತೆಗೆ |ಒಳಗಾದೆನೊ ನಾ ಹೀಗೆಬಳಲಿಸ ಬ್ಯಾಡವೊ ಭಕ್ತ ಕುಟುಂಬಿ |ನಳಿನದಳಾಂಬಕ ನೀ ಸಲಹೆನ್ನನು || ೨ ||…
-
Enidu Bayala Pasha
Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು ಎನಗೆ ಸರಿಯಿಲ್ಲೆಂಬಹಂ-ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತುಸದ್ಗತಿ ತೋರೊ [೧] ಬಡವರಾಧಾರಿ ಕೇಳೊ ಸಂಸಾರದಮಡುವಿನೊಳಗೆ ಧುಮುಕಿ,ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿಹೊತ್ತು ಪಡೆದ ಜನನಿ,ಪುತ್ರ ಸಹೋದರರ…
-
Maleya dayamado
Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರುಮಗಿ ಮಗಿದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು ಯೋಚನೆಯ ಮಾಡುತಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨|| ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣಬಂದಿದೆ ಭಾದ್ರಪದ ಮಾಸವೀಗಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ…
